ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಲಾದೇವಿ ಒಲಿಯುವುದು ಪ್ರಾಮಾಣಿಕ ಸೇವೆಯಿಂದ : ಚಿಟ್ಟಾಣಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 15 , 2015
ಜನವರಿ 15, 2015

ಕಲಾದೇವಿ ಒಲಿಯುವುದು ಪ್ರಾಮಾಣಿಕ ಸೇವೆಯಿಂದ : ಚಿಟ್ಟಾಣಿ

ಸಿದ್ದಾಪುರ : ಕಲಾವಿದನಾದವನು ಪ್ರಾಮಾಣಿಕ ಕಲಾಸೇವೆ ಮಾಡಿದರೆ ಮಾತ್ರ ಕಲಾದೇವಿ ಒಲಿಯುತ್ತಾಳೆ. ಅಂತಹ ಕಲಾವಿದರಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಒಬ್ಬರು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ವಾಜಗದ್ದೆಯಲ್ಲಿ ಯಕ್ಷಮಿತ್ರ ಬಳಗ, ದುರ್ಗಾವಿನಾಯಕ ದೇವಾಲಯ, ಯುವಕ ಸಂಘದ ಆಶ್ರಯದಲ್ಲಿ ಆಂಜನೇಯ ಕಪಾ ಯಕ್ಷವಂದ ಕೇಡಲಸರ ಇದರ ದಶಮಾನೋತ್ಸವ ಸಮಾರೋಪದ ಅಧ್ಯಕ್ಷತೆ ವಹಿಸಿ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಜೀವಮಾನ ಸಾಧನೆಗಾಗಿ ಯಕ್ಷರಾಜ ಪ್ರಶಸ್ತಿ ನೀಡಿ ಮಾತನಾಡಿದರು.

ಸನ್ಮಾನ ಎಂದರೆ ಪ್ರೋತ್ಸಾಹ, ಅಂತಹ ಪ್ರೋತ್ಸಾಹ ಪಡೆಯಲು ಕಲಾವಿದ ಶ್ರಮವಹಿಸಬೇಕು. ಯಕ್ಷಗಾನ ಉಳಿಸಿ ಬೆಳೆಸಬೇಕಾದರೆ ಕೇವಲ ಕಲಾವಿದರಿಂದ ಮಾತ್ರ ಸಾಧ್ಯವಿಲ್ಲ. ಅಭಿಮಾನಿಗಳು, ಪ್ರೋತ್ಸಾಹಕರು ಹಾಗೂ ಸಂಘಟಕರ ಅವಶ್ಯಕತೆ ಅತ್ಯವಶ್ಯ. ರಾಜಶೇಖರ ಹಂದೆಯಂತಹ ಪೋಷಕರು ಯಕ್ಷಗಾನ ಕ್ಷೇತ್ರಕ್ಕೆ ಬೇಕು ಎಂದರು.

ಸಮಾರೋಪ ಮಾತನಾಡಿದ ರಾಜಶೇಖರ ಹಂದೆ, ದೇಶ,ವಿದೇಶಗಳಲ್ಲಿ ಪ್ರಚಲಿತವಾಗುತ್ತಿರುವ ಯಕ್ಷಗಾನವನ್ನು ನಮ್ಮ ನೆಲದಲ್ಲಿ ನಮ್ಮ ಮಕ್ಕಳಿಗೆ ಕಲಿಸಲು ಹಿಂದೆ ಬೀಳುತ್ತಿದ್ದೇವೆ. ರಾಮಾಯಣ, ಮಹಾಭಾರತ ಹಾಗೂ ಪುರಾಣ ಸನ್ನಿವೇಶಗಳನ್ನು ಮಕ್ಕಳಿಗೆ ತಿಳಿಸಬೇಕು. ಯಕ್ಷಗಾನ ಗೋಷ್ಠಿ, ವಿಚಾರ ಸಂಕಿರಣದಲ್ಲಿ ಯಕ್ಷಗಾನ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಆಗ್ರಹಿಸಿದರು.

ಹಾರ್ಸಿಕಟ್ಟಾ ಗ್ರಾ.ಪಂ.ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ, ಗೋಪಾಲ ಹೆಗಡೆ ಹುಲಿಮನೆ, ಗೋಪಾಲ ಹೆಗಡೆ ವಾಜಗದ್ದೆ, ಬಂಗಾರ್ಯ ನಾಯ್ಕ ಹಳಿಯಾಳ, ಸುಧಾಕರರಾವ್ ಹೆಗ್ಗೋಡ ಉಪಸ್ಥಿತರಿದ್ದರು.

ಯಕ್ಷರಾಜ ಪ್ರಶಸ್ತಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಗೆ ಜೀವಮಾನ ಸಾಧನೆಗಾಗಿ ಯಕ್ಷರಾಜ ಪ್ರಶಸ್ತಿಯನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ರಾಜಶೇಖರ ಹಂದೆ ಉಪ್ಪಿನಕುದ್ರು ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶಿವಾನಂದ ಕೋಟ, ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ ನೀಲ್ಕೋಡ, ಶಶಿಕಾಂತ ಶೆಟ್ಟಿ, ರಾಘವೇಂದ್ರ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ಸುನೀಲ್ ಭಂಡಾರಿ, ರಾಕೇಶ್ ಮಲ್ಯ, ವಿನಾಯಕ ಕಲ್ಲಗದ್ದೆ, ವೆಂಕಟೇಶ ಹೆಗಡೆ ಬಗರಿಮಕ್ಕಿ ಮುಂತಾದ ಕಲಾವಿದರನ್ನು ಹಂದೆ ಸನ್ಮಾನಿಸಿದರು.

ಪಿ.ವಿ.ಹೆಗಡೆ ಪೆಟೇಸರ ಸ್ವಾಗತಿಸಿದರು. ನಾಗರಾಜ ಮತ್ತಿಗಾರ, ಸಂಜಯ ಹೆಗಡೆ, ವಿನಾಯಕ ಹೆಗಡೆ ನಿರ್ವಹಿಸಿದರು. ರವಿ ಹೆಗಡೆ ವಾಜಗದ್ದೆ ವಂದಿಸಿದರು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ